ಡಾ. ವಿಷ್ಣುವರ್ಧನ್ ಅಭಿಮಾನಿಯಿಂದ ರಾಕಿಂಗ್ ಸ್ಟಾರ್ ಯಶ್ ಗೆ ಪತ್ರ | Filmibeat Kannada

2017-11-20 58

ನೊಂದಿರುವ ಅಭಿಮಾನಿಗಳನ್ನ ನೋಯಿಸಬೇಡಿ ಯಶ್: ವಿಷ್ಣು ಅಭಿಮಾನಿಯ ಪತ್ರ. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾದಲ್ಲಿ ಡಾ.ವಿಷ್ಣುವರ್ಧನ್ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದ ಯಶ್ ನಿನ್ನೆ 'ವಿಷ್ಣುವರ್ಧನ್' ರವರ ಪರ ನಿಂತು ಮಾತನಾಡಿದ್ರು. ನಟ ಅನಿರುದ್ಧ್ ಅಭಿನಯದ 'ರಾಜಸಿಂಹ' ಸಿನಿಮಾದ ಆಡಿಯೋ ರಿಲೀಸ್ ಸಮಾರಂಭದಲ್ಲಿ ಭಾಗಿಯಾಗಿ ಮೊದಲಬಾರಿಗೆ ವಿಷ್ಣುವರ್ಧನ್ ಸ್ಮಾರಕದ ಪರವಾಗಿ ಧ್ವನಿ ಎತ್ತಿದರು. ಸರ್ಕಾರ 'ವಿಷ್ಣುವರ್ಧನ್' ರಿಗೆ ಸಲ್ಲಬೇಕಾದ ಗೌರವ ಸಲ್ಲಿಸಲಿ. ಈ ಕೆಲಸ ಬೇಗ ಆಗಲಿ, ಸರ್ಕಾರ ಆಗಲ್ಲ ಅಂದ್ರೆ ನಾವು ಅಭಿಮಾನಿಗಳು ಸೇರಿ ಸ್ಮಾರಕ ಮಾಡುತ್ತೇವೆ, ನನಗೆ 'ವಿಷ್ಣುವರ್ಧನ್' ರ ಬಗ್ಗೆ ಮಾತನಾಡಲು ಎಲ್ಲೂ ಅವಕಾಶ ಸಿಕ್ಕಿರಲಿಲ್ಲ ಇಂದು ಮಾತನಾಡುವ ಸಮಯ ಬಂದಿದೆ ಎಂದಿದ್ರು. ಈ ವಿಚಾರವನ್ನ ಇದೇ 'ಫಿಲ್ಮಿಬೀಟ್' ನಲ್ಲಿ ಓದಿದ್ರಿ. ಯಶ್ ರವರ ಈ ಮಾತಿನಿಂದ ಬೇಸರಗೊಂಡಿರುವ ವಿಷ್ಣು ಅಭಿಮಾನಿಗಳು ರಾಕಿಂಗ್ ಸ್ಟಾರ್ ಗೆ ಈ ಬಗ್ಗೆ ಪತ್ರ ಬರೆದಿದ್ದಾರೆ. ಹಾಗಾದ್ರೆ ಪತ್ರದಲ್ಲೇನಿದೆ.? ಪತ್ರ ಬರೆದವರ್ಯಾರು.?

Videos similaires